ಸಚಿವ ಎಂ ಬಿ ಪಾಟೀಲ್ ರಿಗೆ ಸಿ ಎಂ ಆಗಬೇಕೆಂಬ ಬಯಕೆ ಇದೆಯಂತೆ | Oneindia Kannada

  • 6 years ago
Minister M.B.Patil opens up about his desire to become CM. MB Patil said i want to became CM but not now, This time Siddaramaiah will become CM again.

ಮುಖ್ಯಮಂತ್ರಿ ಆಗಬೇಕೆಂಬ ತಮ್ಮ ಮನದಾಸೆಯನ್ನು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಹೊರಹಾಕಿದ್ದಾರೆ. ಹಾಗೆಂದು ಅವರು ಸಿದ್ದರಾಮಯ್ಯ ಅವರ ಕುರ್ಚಿ ಮೇಲೆ ಕಣ್ಣು ಹಾಕಿಲ್ಲ. ಇನ್ನು ಬಹಳ ಸಮಯದ ನಂತರ ಸಿ.ಎಂ ಆಗುತ್ತೇನೆ ಅಂದಿದ್ದಾರೆ. ವಿಜಯಪುರದಲ್ಲಿ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಬಾರಿ ಮತ್ತೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ. ನನಗೂ ಸಿ.ಎಂ ಆಗುವ ಆಸೆ ಇದೆ ಆದರೆ ಅದಕ್ಕಿನ್ನೂ ಸಾಕಷ್ಟು ಸಮಯ ಇದೆ ಎಂದರು. ನನಗೆ ಸಿ.ಎಂ ಆಗುವ ಆಸೆ ಇದೆ, ದುರಾಸೆ ಇಲ್ಲ ಎಂದರು.ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಅವರು ಸಿದ್ದರಾಮಯ್ಯ ಅವರ ಆಡಳಿತವನ್ನು ಹೊಗಳಿದ ಬಗ್ಗೆ ಮಾತನಾಡಿದ ಅವರು '4 ವರ್ಷದಲ್ಲಿ ಯಾವುದೆ ಕಪ್ಪು ಚುಕ್ಕೆ ಇಲ್ಲದೆ ನನ್ನಂತೆ ಸಿದ್ಧರಾಮಯ್ಯ ಕೆಲಸ ಮಾಡಿದ್ದಾರೆಂದು ದೇವರಗೌಡರೇ ಹೊಗಳಿದ್ದಾರೆ' ಆದರೆ ಕುಮಾರಸ್ವಾಮಿ ಅವರು ಇದನ್ನು ಸಹಿಸಲಾರದೆ 'ದೇವೇಗೌಡರು ಸಿದ್ದರಾಮಯ್ಯ ಅವರನ್ನು ಗೇಲಿ ಮಾಡಲು ಹಾಗೆ ಮಾತನಾಡಿದ್ದಾರೆ' ಎಂದಿದ್ದಾರೆ, ಒಂದು ವೇಳೆ ದೇವೇಗೌಡರು ಗೇಲಿ ಮಾಡಿದ್ದರೆ ಅದು ದೇವೇಗೌಡರಿಗೂ ಅನ್ವಯವಾಗುತ್ತದೆ ಎಂದರು.

Recommended