ಚಂದನ್ ಶೆಟ್ಟಿ ತಾಳ್ಮೆಗೆ ಹ್ಯಾಟ್ಸ್ ಆಫ್ ಎಂದ ಸುದೀಪ್ | FIlmibeat Kannada

  • 6 years ago
ಕಳೆದ ವಾರ 'ಬಿಗ್ ಬಾಸ್' ಮನೆಯಲ್ಲಿ ದೊಡ್ಡ ಅವಾಂತರ ನಡೆಯಿತು. ಕುಚಿಕು ಗೆಳೆಯರಂತೆ ಇದ್ದ ಚಂದನ್ ಶೆಟ್ಟಿ ಹಾಗೂ ದಿವಾಕರ್ ಮಧ್ಯೆ ಘೋರ ಗಲಾಟೆ ನಡೆಯಿತು. 'ಬಲೂನ್' ಟಾಸ್ಕ್ ನಲ್ಲಿ ಕಿತ್ತಾಡಿಕೊಂಡ ಚಂದನ್ ಶೆಟ್ಟಿ ಟಿ-ಶರ್ಟ್ ನ ದಿವಾಕರ್ ಹರಿದು ಹಾಕಿದರು. ತಮ್ಮ ಟಿ-ಶರ್ಟ್ ನ ರೋಷಾವೇಷದಿಂದ ದಿವಾಕರ್ ಹರಿಯುತ್ತಿದ್ದರೂ, ಚಂದನ್ ಶೆಟ್ಟಿ ಯಾವುದೇ ರಿಯಾಕ್ಷನ್ ಕೊಡಲಿಲ್ಲ. ಬಳಿಕ ದಿವಾಕರ್ ಕ್ಷಮೆ ಕೇಳಿದರು. ಚಂದನ್ ಶೆಟ್ಟಿ ಕೂಡ ಕ್ಷಮಿಸಿದರು.ಚಂದನ್ ಶೆಟ್ಟಿ ಆಗಿದ್ದಕ್ಕೆ ಈ ಗಲಾಟೆ ದೊಡ್ಡ ಮಟ್ಟಕ್ಕೆ ಹೋಗದೆ ತಣ್ಣಗಾಯ್ತು. ಆದ್ರೆ, ಚಂದನ್ ಶೆಟ್ಟಿ ಜಾಗದಲ್ಲಿ ಬೇರೆ ಯಾರೇ ಇದ್ದಿದ್ರೂ, ದಿವಾಕರ್ ಗೆ ಗ್ಯಾರೆಂಟಿ ಗೇಟ್ ಪಾಸ್ ಸಿಕ್ತಿತ್ತು ಎಂದಿದ್ದಾರೆ ಕಿಚ್ಚ ಸುದೀಪ್.''ಆ ಜಾಗದಲ್ಲಿ ಚಂದನ್ ಶೆಟ್ಟಿ ಇರುವುದಕ್ಕೆ ನೀವು ಬಚಾವ್ ಆದ್ರಿ. ಬೇರೆ ಯಾರಾದರೂ ಆಗಿದಿದ್ರೆ, ಖಂಡಿತ ತೊಂದರೆ ಆಗುತ್ತಿತ್ತು. ದೈಹಿಕ ಹಲ್ಲೆ ನಡೆಸಿದ ಪರಿಣಾಮ ನೀವು ಎಲಿಮಿನೇಟ್ ಆಗುತ್ತಿದ್ರಿ. ಅದು ಕಪ್ಪು ಚುಕ್ಕೆ'' ಎಂದು 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ದಿವಾಕರ್ ಗೆ ಸುದೀಪ್ ಹೇಳಿದರು.

Bigg Boss Kannada 5: Week 8:big boss is one of the big reality show in colors kannada.there chnadan shetty is playing very well and he have more patience for that reason sudeep says hats off to him

Recommended