ಟ್ವೀಟ್ ಮಾಡಿ ಯಡವಟ್ಟು ಮಾಡಿಕೊಂಡ ಸುದೀಪ್. | Sudeep

  • 5 years ago
ನಾವೇನು ಕೈಗೆ ಬಳೆ ಹಾಕಿಲ್ಲ....' ಈ ವಾಕ್ಯದ ನಿಜವಾದ ತಾತ್ಪರ್ಯ ಅನೇಕರಿಗೆ ಗೊತ್ತಿಲ್ಲ. ಇದೊಂದು ರೀತಿ ಸವಾಲು ಹಾಕುವ ವಾಕ್ಯವಾಗಿ ಬಳಕೆಯಾಗಿದೆ. ಅದನ್ನ ಮತ್ತೆ ಮತ್ತೆ ಸಿನಿಮಾಗಳಲ್ಲಿ, ರಾಜಕೀಯ ನಾಯಕರು, ನಾಟಕಗಳಲ್ಲಿ, ಪ್ರತಿಭಟನೆಗಳಲ್ಲಿ ಬಳಸುವುದರ ಮೂಲಕ ಅದೊಂದು ಡೈಲಾಗ್ ಎಂಬಂತೆ ಬಿಂಬಿತವಾಗಿದೆ. ಇದೀಗ, ಕಿಚ್ಚ ಸುದೀಪ್ ಅವರು ಎದುರಾಳಿಗೆ ಎಚ್ಚರಿಕೆ ನೀಡಿರುವ ಟ್ವೀಟ್ ನಲ್ಲಿ ''ನಾವು ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ'' ಎಂದು ಬಳಸಿದ್ದಾರೆ. ಈ ವಾಕ್ಯ ಬಳಕೆಯ ವಿರುದ್ಧ ಮಹಿಳೆಯರು ಆಕ್ರೋಶಗೊಂಡಿದ್ದಾರೆ.
''We had put bracelets, not bangles''...Sudeep made Statement about pailwan piracy. But, Women outrage against kannada actor kiccha sudeep statement.

Recommended