ಮಂಡ್ಯದಲ್ಲಿ ಸೋತರೂ ನಿಖಿಲ್ ಗೆ ಸಿಕ್ತು ಭರ್ಜರಿ ಗಿಫ್ಟ್..! | Oneindia Kannada
  • 5 years ago
ಮಗನೂ ತನ್ನಂತೆ ರಾಜಕೀಯದಲ್ಲಿ ಉನ್ನತ ಭವಿಷ್ಯ ಕಲ್ಪಿಸಿಕೊಳ್ಳಬೇಕೆಂಬ ಮಹದಾಸೆಯಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯ ಚುನಾವಣೆಗೆ ನಿಲ್ಲಿಸಿದ್ದ ಕುಮಾರಸ್ವಾಮಿ ಅವರಿಗೆ ಭಾರಿ ನಿರಾಸೆಯೇ ಆಗಿದೆ. ನಿಖಿಲ್ ಕುಮಾರಸ್ವಾಮಿ ಲೋಕಸಭೆ ಪ್ರವೇಶದ ಮೂಲಕ ರಾಜಕೀಯಕ್ಕೆ ಪ್ರವೇಶ ಪಡೆಯಬೇಕು ಎಂಬುದು ಕುಮಾರಸ್ವಾಮಿ ಆಸೆಯಾಗಿತ್ತು. ಆದರೆ ನಿಖಿಲ್ ಅವರ ದಾಯಾದಿ ಸಹೋದರ ಪ್ರಜ್ವಲ್ ರೇವಣ್ಣ ಲೋಕಸಭೆಗೆ ಹೋಗುತ್ತಿದ್ದಾರೆ. ಇಬ್ಬರೂ ಒಟ್ಟಿಗೆ ರಾಜಕೀಯ ಪ್ರವೇಶ ಮಾಡಬೇಕು ಎಂಬುದು ಕುಮಾರಸ್ವಾಮಿ ಆಸೆಯಾಗಿತ್ತು, ಅದಕ್ಕೆಂದೇ ವಿಧಾನಸಭೆ ಚುನಾವಣೆ ಸಮಯದಲ್ಲಿ ಪ್ರಜ್ವಲ್‌ ರೇವಣ್ಣಗೆ ಟಿಕೆಟ್ ನಿರಾಕರಿಸಲಾಗಿತ್ತು. ಆದರೆ ಎಚ್‌ಡಿಕೆ ಲೆಕ್ಕಾಚಾರ ಈಗ ಬದಲಾಗಿದೆ.

CM Kumaraswamy's son Nikhil Kumaraswamy may get high position in JDS party. Kumaraswamy thinking of giving state president post to Nikhil Kumaraswamy.
Recommended