ಹಬ್ಬದ ದಿನ ಖುಷಿ ಹೆಚ್ಚಿಸಿದ ಅಂಜನಿಪುತ್ರ ಹಾಗು ಬೃಹಸ್ಪತಿ | Filmibeat Kannada
  • 6 years ago
ಸಂಕ್ರಾಂತಿ ಹಬ್ಬದ ಆಚರಣೆ ಇರುವ ಅಭಿಮಾನಿಗಳಿಗೆ ನಟರಾದ ಪುನೀತ್ ರಾಜ್ ಕುಮಾರ್ ಮತ್ತು ಮನೋರಂಜ್ ಗಿಫ್ಟ್ ನೀಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ 'ಅಂಜನಿಪುತ್ರ' ಮತ್ತು ಮನೋರಂಜನ್ ಅವರ 'ಬೃಹಸ್ಪತಿ' ಚಿತ್ರಗಳ ಕಡೆಯಿಂದ ಅಭಿಮಾನಿಗಳ ಹಬ್ಬದ ಖುಷಿ ಮತ್ತಷ್ಟು ಜಾಸ್ತಿ ಆಗಿದೆ.

'ಅಂಜನಿಪುತ್ರ' ಸಿನಿಮಾ ರಿಲೀಸ್ ಆಗಿ 25 ದಿನಗಳನ್ನು ಪೂರೈಸಿದೆ. ಈ ವಿಶೇಷವಾಗಿ ಚಿತ್ರತಂಡ ಟ್ರೇಲರ್ ರಿಲೀಸ್ ಮಾಡಿದೆ. ಸಿನಿಮಾ ರಿಲೀಸ್ ಆಗುವುದಕ್ಕೆ ಮುಂಚೆ ಟ್ರೇಲರ್ ಬಿಡುವುದು ಸಾಮಾನ್ಯ ಸಂಗತಿ. ಆದರೆ ಸಿನಿಮಾ ಬಂದ ಮೇಲೆ 'ಅಂಜನಿಪುತ್ರ' ಮತ್ತೊಂದು ಟ್ರೇಲರ್ ಬಂದಿದೆ. ಅಷ್ಟೆ ಅಲ್ಲದೆ ಇಂದಿನಿಂದ ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಪ್ರೇಕ್ಷಕರು ಪುನೀತ್ ಅವರ ಹೆಚ್ಚು ಆಕ್ಷನ್ ದೃಶ್ಯಗಳನ್ನು ಕಣ್ಣು ತುಂಬಿಕೊಳ್ಳಬಹುದಾಗಿದೆ. 'ಅಂಜನಿಪುತ್ರ' ಸಿನಿಮಾ ನೋಡೋರಿಗೆ ಮತ್ತಷ್ಟು ಕಿಕ್ ನೀಡಲು ಹೊಸ ದೃಶ್ಯ ಸೇರಿಸಲಾಗಿದೆ.
Actor puneeth Rajkumar and Manoranjan have few gifts for their fans this Sankranti . Watch the video to know more
Recommended