ಕಾಂಗ್ರೆಸ್ ನಮ್ಮ ಟಾರ್ಗೆಟ್ ಆಗಬೇಕು ಎಂದು ಕರ್ನಾಟಕ ಬಿಜೆಪಿ ನಾಯಕರಿಗೆ ಸೂಚಿಸಿದ ಅಮಿತ್ ಶಾ | Oneindia Kannada

  • 6 years ago
The one-plus-one strategy has to be implemented at any cost, said BJP's national president Amit Shah during a meet with his party legislators from Karnataka in Bengaluru. This strategy mandates that a legislator looks after his own constituency and also the one allotted to them by the party.

ಕರ್ನಾಟಕದಲ್ಲಿ ಒನ್ ಪ್ಲಸ್ ಒನ್ ಸ್ಟ್ರಾಟಜಿಯನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕರ್ನಾಟಕ ಬಿಜೆಪಿ ನಾಯಕರಿಗೆ ಖಡಕ್ ಸೂಚನೆ ನೀಡಿದ್ದಾರೆ.ಡಿ.31 ರಂದು ಬೆಂಗಳೂರಿನ ಯಲಹಂಕದ ರಾಯಲ್ ಆರ್ಕಿಡ್ ನಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಹಲವು ಸಭೆಗಳು ನಡೆದಿದ್ದವು. 2018 ರ ಕರ್ನಾಟಕ ವಿಧಾನಸಭೆ ಚುನಾವಣೆ ಕುರಿತಂತೆ ಈ ಸಂದರ್ಭದಲ್ಲಿ ಗಂಭೀರವಾಗೊ ಚರ್ಚೆ ನಡೆಸಿದ ಅಮಿತ್ ಶಾ, ಕರ್ನಾಟಕದಲ್ಲಿ ಇನ್ನೂ ಒನ್ ಪ್ಲಸ್ ಒನ್ ಸ್ಟ್ರಾಟಜಿ ಜಾರಿಗೆ ಬಂದಿಲ್ಲ, ಏಕೆ? ಎಂದು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು."ಒನ್ ಪ್ಲಸ್ ಒನ್ ಸ್ಟ್ರಾಟಜಿಯನ್ನು ಕಡ್ಡಾಯವಾಗಿ ಜಾರಿಗೆ ತರುವಂತೆ ನಾನು ಈ ಮೊದಲೇ ಸೂಚನೆ ನೀಡಿದ್ದೆ. ಆದರೆ ಅದು ಇದುವರೆಗೂ ಜಾರಿಗೆ ಬಂದಿಲ್ಲ, ಏಕೆ? ಒಂದು ಸಣ್ಣ ಕೆಲಸವನ್ನೂ ಮಾಡದೆ, ಗೆಲ್ಲಬೇಕು ಎಂದರೆ ಹೇಗಾಗುತ್ತದೆ?" ಎಂದು ಬಿಜೆಪಿ ನಾಯಕರಿಗೆ ಬಿಸಿಮುಟ್ಟಿಸಿದ್ದಾರೆ.

Recommended