ಮಂಗಳವಾರ/ಶುಕ್ರವಾರ ಈ ಕೆಲಸ ಮಾಡ್ಲೇ ಬೇಡಿ ಮಾಡುದ್ರೆ ಏನಾಗುತ್ತೆ ಗೊತ್ತಾ? | Oneindia Kannada

  • 7 years ago
ನಮ್ಮಲ್ಲಿ ಬಹಳಷ್ಟು ಮಂದಿಗೆ ಇದು ಗೊತ್ತಿರುವ ಸಂಗತಿ…ಆದರೆ ಇದರಲ್ಲಿ ನಿಜವೆಷ್ಟು ಎಂಬುದು ಮಾತ್ರ ಯಾರಿಗೂ ಸರಿಯಾಗಿ ಗೊತ್ತಿಲ್ಲ. ಯಾರಾದರೂ ಹಣ ಕೊಡಬೇಕೆಂದರೂ ಮಂಗಳ, ಶುಕ್ರವಾರಗಳಲ್ಲಿ ಸಾಮಾನ್ಯವಾಗಿ ಕೊಡಲ್ಲ. ನಾಳೆ ಕೊಡ್ತೀನಿ ಅಂತಾರೆ. ನಾವು ಕೂಡ ಬಹಳಷ್ಟು ಮಂದಿಗೆ ಅದೇ ರೀತಿ ಹೇಳಿರುತ್ತೇವೆ. ಶುಕ್ರವಾರ ಯಾರಿಗಾದರೂ ಸಾಲ ಕೊಟ್ಟರೆ ತಿರುಗಿ ವಾಪಸ್ ಬರುವುದು ಕಷ್ಟವೆಂದು, ಮಂಗಳವಾರ ಸಾಲ ಕೊಟ್ಟರೆ ಜಗಳ ಆಗುತ್ತದೆಂದು ಬಹಳಷ್ಟು ಮಂದಿಯ ನಂಬಿಕೆ. ಇಷ್ಟಕ್ಕೂ ಅಸಲಿ ಸಂಗತಿ ಏನು ಅಂತ ಈಗ ತಿಳಿದುಕೊಳ್ಳೋಣ.ಹೇಳಬೇಕೆಂದರೆ ಶ್ರೀಮಹಾಲಕ್ಷ್ಮಿ ಭೃಗುಮಹರ್ಷಿ ಮಗಳು. ಹಾಗಾಗಿ ಲಕ್ಷ್ಮಿದೇವಿಗೆ ಶುಭದಿನವಾಗಿ ಭಾವಿಸುವ ಶುಕ್ರವಾರಕ್ಕೆ ಇನ್ನೊಂದು ಹೆಸರು ಭೃಗುವಾರ. ಲಕ್ಷ್ಮಿದೇವಿಗೆ ಇಷ್ಟವಾದ ಈ ದಿನವನ್ನು ಲಕ್ಷ್ಮಿಯನ್ನು ಮನೆಯಿಂದ ಹೊರಗೆ ಕಳುಹಿಸಬಾರದೆಂಬ ನಂಬಿಕೆ ಇದೆ. ಒಂದು ವೇಳೆ ಆ ರೀತಿ ಕಳುಹಿಸಿದರೆ ಮನೆಯಲ್ಲಿ ಲಕ್ಷ್ಮಿ ನಿಲ್ಲಲ್ಲ ಎಂಬ ಭಾವನೆ. ಅದೇ ರೀತಿ ಮಂಗಳವಾರ ಕುಜ ಗ್ರಹಕ್ಕೆ ಸಂಬಂಧಿಸಿದ್ದು. ಈ ದಿನ ನಮ್ಮ ಕೈಯಿಂದ ಹಣ ಕೊಟ್ಟರೆ ಜಗಳಕ್ಕೆ ದಾರಿಯಾಗುತ್ತದೆ ಎಂಬ ನಂಬಿಕೆ ಉಂಟು. ಹಾಗಾಗಿ ಶುಕ್ರವಾರ ಯಾರಾದರು ಹಣ ಕೊಟ್ಟರೆ ಮತ್ತೆ ವಾಪಸ್ ಬರುವುದು ಕಷ್ಟವೆಂದು, ಮಂಗಳವಾರ ಸಾಲ ಕೊಟ್ಟರೆ ಜಗಳ ತಪ್ಪಿದ್ದಲ್ಲ ಎಂದು ಹಿರಿಯರು ಹೇಳುತ್ತಿರುತ್ತಾರೆ.ಹಾಗಾಗಿ ಈ ಎರಡು ದಿನಗಳಲ್ಲಿ ಯಾರೂ ಹಣ ಸಾಲ ಕೊಡಲ್ಲ. ಆದರೆ ಇದರಲ್ಲಿ ಎಳ್ಳಷ್ಟೂ ನಿಜವೆಲ್ಲವೆಂದು, ಇದೊಂದು ಸಂಪೂರ್ಣ ಅಶಾಸ್ತ್ರೀಯ ವಾದ ಎಂದು ಹೇಳುವವರೂ ಇದ್ದಾರೆ. ಮಂಗಳ, ಶುಕ್ರವಾರಗಳಂದು ಸಾಲ ತೀರಿಸಿಕೊಳ್ಳುವುದಷ್ಟೇ ಅಲ್ಲ, ಮನೆ ಕೆಲಸ ಹಾಗೂ ಇತರೆ ಕುಟುಂಬ ವ್ಯವಹಾರಗಳಿಗಾಗಿ ನಿರಾಯಾಸವಾಗಿ ಖರ್ಚು ಮಾಡಬಹುದೆಂದು ಹೇಳುತ್ತಿದ್ದಾರೆ. ಇದರಲ್ಲಿ ಯಾವುದು ಸತ್ಯವೋ ಇನ್ಯಾವುದು ಮಿಥ್ಯವೋ ಗೊತ್ತಿಲ್ಲದೆ…ಯಾಕೆ ಬಂದ ರಗಳೆ ಎಂದು ಬಹಳಷ್ಟು ಮಂದಿ ಈ ಎರಡು ದಿನಗಳಲ್ಲಿ ಯಾವುದೇ ಖರ್ಚು ಮಾಡಲ್ಲ. ಏನೇ ಆಗಲಿ ಯಾವುದೇ ನಂಬಿಕೆ ಅಥವಾ ಮೂಡನಂಬಿಕೆಯನ್ನು ಜನ ನಂಬುವಷ್ಟು ದಿನ ಯಾರೂ ಏನೂ ಮಾಡಕ್ಕಾಗಲ್ಲ ಅಲ್ ಲವೇ?

Don't do this works on Tuesday/Friday . in case you done this work means you will suffer from financial problems,.watch this video

Recommended