News Cafe | ಸಚಿವ ಸಂಪುಟ ಅಂಗಳಕ್ಕೂ ಕಾಲಿಟ್ಟ 'ಈದ್ಗಾ' ವಿವಾದ | HR Ranganath | Aug 11, 2022

  • 2 years ago
ಈದ್ಗಾ ಮೈದಾನ ವಿವಾದ ಸಚಿವ ಸಂಪುಟ ಅಂಗಳಕ್ಕೆ ಕಾಲಿಟ್ಟಿದೆ. ನಾಳಿನ ಸಂಪುಟ ಸಭೆಯಲ್ಲಿ ಚಾಮರಾಜಪೇಟೆ ಈದ್ಗಾ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ. ಮೈದಾನ ಕಂದಾಯ ಇಲಾಖೆ ಸ್ವತ್ತಾಗಿರುವುದರಿಂದ ವಿವಾದ ಸಂಬಂಧ ಸರ್ಕಾರವೇ ಮುಂದಿನ ನಿರ್ಣಯ ತೆಗೆದುಕೊಳ್ಳಲು ಮುಂದಾಗಿದೆ. ಸಿಎಂ ಬೊಮ್ಮಾಯಿ ಸಚಿವರ ಅಭಿಪ್ರಾಯಗಳನ್ನು ಪಡೆದು ವಿವಾದ ತಣ್ಣಗಾಗಿಸಲು ಸೂಕ್ತ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಈದ್ಗಾ ಮೈದಾನ ವಿವಾದ ಸಂಬಂಧ ಬೆಂಗಳೂರು ಡಿಸಿ ಮತ್ತು ನಗರ ಪೊಲೀಸ್ ಆಯುಕ್ತರಿಂದ 2 ಪ್ರತ್ಯೇಕ ವರದಿಗಳು ಸರ್ಕಾರಕ್ಕೆ ಸಲ್ಲಿಕೆ ಆಗಿವೆ. ಸಚಿವ ಸಂಪುಟ ಸಭೆಯಲ್ಲಿ ಈ ಎರಡೂ ವರದಿಗಳ ಪರಾಮರ್ಶೆ ನಡೆಸಿ, ಬೆಂಗಳೂರು ಸಚಿವರ ಅಭಿಪ್ರಾಯ ಕೇಳಲಾಗುತ್ತೆ, ಈದ್ಗಾ ಮೈದಾನದಲ್ಲಿ ಯಾವುದೇ ಸಂಘಟನೆಗಳಿಗೂ ಗಣೇಶೋತ್ಸವ, ಸ್ವಾತಂತ್ರ್ಯೋತ್ಸವ ಆಚರಣೆಗಳಿಗೆ ಅವಕಾಶ ಕೊಡಬಾರದು. ಮೈದಾನದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳವಂತೆ ಸಿಎಂಗೆ ಮನವಿ ಮಾಡಿಕೊಳ್ಳಲು ನಗರದ ಬಹುತೇಕ ಸಚಿವರು ತೀರ್ಮಾನಿಸಿದ್ದಾರೆನ್ನಲಾಗಿದೆ. ಇದೇ ನಿರ್ಧಾರ ಬಹುತೇಕ ಸಂಪುಟದಲ್ಲೂ ಕೈಗೊಳ್ಳುವ ಸಾಧ್ಯತೆ ಇದೆ. ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಮಾಡೋದಾದ್ರೆ ಅಧಿಕಾರಿಗಳಿಂದ ಧ್ವಜಾರೋಹಣ ಮಾಡಿಸಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

#publictv #newscafe #hrranganath

Recommended