News Cafe | ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಕದನ | HR Ranganath | Aug 11, 2022

  • 2 years ago
ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ವಿಚಾರಕ್ಕೆ ಹಿಂದೂ ಸಂಘಟನೆಗಳು-ಮುಸ್ಲಿಂ ಮುಖಂಡರ ನಡುವಿನ ಕಿತ್ತಾಟ ತಾರಕಕ್ಕೇರಿದೆ. ಸ್ವಾತಂತ್ರ್ಯ ದಿನಾಚರಣೆಯ ಅಮೃತೋತ್ಸವ ಆಚರಣೆಗೆ ಅವಕಾಶ ಕೊಡಬೇಕು ಅಂತಾ ಹಿಂದೂ ಸಂಘಟನೆಗಳು ಡಿಸಿಗೆ ಮನವಿ ಮಾಡಿವೆ. ಆದರೆ, ಮುಸ್ಲಿಂ ಮುಖಂಡರು ಮಾತ್ರ, ನಾವೇ ಧ್ಬಜಾರೋಹಣ ಮಾಡ್ತೇವೆ ಅಂತಾ ಕೌಂಟರ್ ಕೊಟ್ಟಿದ್ದಾರೆ. ಇಬ್ಬರ ನಡುವಿನ ಮೈದಾನ ಗುದ್ದಾಟ ಕಂದಾಯ ಇಲಾಖೆಗೆ ತಲೆನೋವಾಗಿದೆ. ಹಿಂದೂ-ಮುಸ್ಲಿಂ ಮುಖಂಡ ಜೊತೆಗೆ ಪೊಲೀಸರು ಈಗಾಗಲೇ ಶಾಂತಿ ಸಭೆ ನಡೆಸಿದ್ದು, ಶಾಂತಿ ಕಾಪಾಡಲು ಸೂಚಿಸಿದ್ದಾರೆ. ಸರ್ಕಾರದ ಯಾವುದೇ ನಿರ್ಧಾರವಾದರೂ ಅದಕ್ಕೆ ಬದ್ಧವಾಗಿರಬೇಕು. ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಈದ್ಗಾ ಮೈದಾನದಲ್ಲಿ ಧ್ವಜಾರೋಹಣಕ್ಕೆ ಅನುಮತಿ ಕೊಡುವ ಸಂಬಂಧ ಸಿಹಿ ಸುದ್ದಿ ಕೊಡ್ತೇವೆ ಅಂತ ಸಚಿವ ಅಶೋಕ್ ನಿನ್ನೆ ಹೇಳಿದ್ದರು. ಇವತ್ತು ಮಧ್ಯಾಹ್ನ 12 ಗಂಟೆಗೆ ವಿಧಾನಸೌಧದಲ್ಲಿ ಬೆಂಗಳೂರು ನಗರ ಡಿಸಿ, ಪೊಲೀಸ್ ಅಧಿಕಾರಿಗಳು, ಬಿಬಿಎಂಪಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಜೊತೆ ಅಶೋಕ್ ಸಭೆ ನಡೆಸಿ ನಿರ್ಧಾರ ಘೋಷಿಸಲಿದ್ದಾರೆ.

#publictv #newscafe #hrranganath

Recommended