News Cafe | ಬುಲ್ಡೋಜರ್ ಅಸ್ತ್ರಕ್ಕೆ ನ್ಯಾಯಮೂರ್ತಿಗಳ ಆಕ್ಷೇಪ | HR Ranganath | June 15, 2022
- 2 years ago
ಪ್ರವಾದಿ ಬಗ್ಗೆ ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಗಲಭೆ ಎಬ್ಬಿಸಿದ್ದ ಮಾಸ್ಟರ್ ಮೈಂಡ್, ಜಾವೇದ್ ಅಹ್ಮದ್ ಮನೆಯನ್ನು ಬುಲ್ಡೋಜರ್ ಬಳಸಿ ಕೆಡವಲಾಗಿತ್ತು. ಇದೀಗ ಹಿಂಸಾಚಾರದಲ್ಲಿ ಭಾಗಿ ಆಗಿದ್ದ 37 ಆರೋಪಿಗಳ ಮನೆಗಳನ್ನು ಇದೇ ರೀತಿ ಧ್ವಂಸ ಮಾಡಲು ಸಿದ್ದತೆ ನಡೆಸಲಾಗ್ತಿದೆ. ಆ ಮನೆಗಳು ನಗರಾಭಿವೃದ್ಧಿ ಪ್ರಾಧಿಕಾರದ ಅನುಮೋದನೆ ಪಡೆದಿಲ್ಲದಿದ್ದರೆ ಕಾನೂನು ಪ್ರಕಾರ ಧ್ವಂಸ ಮಾಡಲು ಆರೋಪಿಗಳ ಮನೆ ವಿಳಾಸವನ್ನು ಪತ್ತೆ ಹಚ್ಚಲಾಗ್ತಿದೆ. ಈ ಮಧ್ಯೆ, ಬುಲ್ಡೋಜರ್ ಅಸ್ತ್ರಕ್ಕೆ ನ್ಯಾಯಮೂರ್ತಿಗಳು ಆಕ್ಷೇಪಿಸಿದ್ದಾರೆ. ಮನೆಗಳನ್ನು ಧ್ವಂಸ ಮಾಡಿದವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ನ ಕೆಲ ನಿವೃತ್ತ ಜಡ್ಜ್, ಹಿರಿಯ ವಕೀಲರು, ಸುಪ್ರೀಂಕೋರ್ಟ್ ಸಿಜೆ ರಮಣರಿಗೆ ಪತ್ರ ಬರೆದಿದ್ದಾರೆ. ಕರ್ನಾಟಕದ ಹೈಕೋರ್ಟ್ ನಿವೃತ್ತ ನ್ಯಾ. ಮೊಹ್ಮದ್ ಅನ್ವರ್ ಸಹ ಪತ್ರಕ್ಕೆ ಸಹಿ ಹಾಕಿದ್ದಾರೆ.
#publictv #newscafe #hrranganath
#publictv #newscafe #hrranganath