Assault Allegation On Former BJP MP Vijayshankar | Mysuru | BJP

  • 2 years ago
ಮೈಸೂರಿನ ಬಿಜೆಪಿ ಒಳಗಿನ ಮುಖಂಡರ ನಡುವಿನ ವೈಮನಸ್ಸುಗಳ ಬೀದಿ ಜಗಳವಾಗುತ್ತಿವೆ. ಎರಡು ತಿಂಗಳ ಹಿಂದೆ ಗ್ಯಾಸ್ ಪೈಪ್ ಲೈನ್ ವಿಚಾರದಲ್ಲಿ ಬಿಜೆಪಿ ನಾಯಕರೆ ಪರಸ್ಪರ ಆರೋಪ, ಪ್ರತ್ಯಾರೋಪಕ್ಕೆ ಇಳಿದಿದ್ದರು. ಇದು ಮುಗಿದ ಬೆನ್ನಲೇ ಈಗ ಬಿಜೆಪಿ ಸಭೆಯಲ್ಲಿ ಮುಖಂಡರ ನಡುವೆ ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಜಗಳ ನಡೆದಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ದಕ್ಷಿಣ ಪದವೀಧರ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸಭೆ ನಡೆದಿತ್ತು. ಆಗ ಮಾಜಿ ಸಂಸದ ವಿಜಯಶಂಕರ್ ಪಕ್ಷದ ಮುಖಂಡನ ಮೇಲೆ ಹಲ್ಲೆಗೆ ಯತ್ನಿಸಿದರು ಎಂದು ಆರೋಪಿಸಲಾಗಿದೆ. ಬಿಜೆಪಿ ಜಿಲ್ಲಾ ಸಹಾ ವಕ್ತಾರ ವಸಂತ್ ಕುಮಾರ್ ಮೇಲೆ ವಿಜಯಶಂಕರ್ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಗೆ ಯತ್ನಿಸಿದ ವಿಡಿಯೋ ವೈರಲ್ ಆಗಿದೆ. ಚುನಾವಣೆಯ ವಿಚಾರ ಚರ್ಚಿಸಲು ಕರೆಯಲಾಗಿದ್ದ ಸಭೆ ವೇಳೆ ಸಿ ಎಚ್ ವಿಜಯಶಂಕರ್ ಭಾಷಣ ಮಾಡುತ್ತಾ ಹಳೆಯ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ವಸಂತ್ ಕುಮಾರ್ ಪ್ರಸಕ್ತ ವಿಚಾರ ಮಾತನಾಡುವಂತೆ ಮನವಿ ಮಾಡಿದರು. ಅಷ್ಟಕ್ಕೇ ಆಕ್ರೋಶಗೊಂಡ ವಿಜಯಶಂಕರ್ ಹಾಗೂ ಅವರ ಬೆಂಬಲಿಗು ಹಲ್ಲೆಗೆ ಯತ್ನಿಸಿದರು ಎನ್ನಲಾಗಿದೆ.

#PublicTV #Mysuru #BJP

Recommended