ಸಿದ್ದರಾಮಯ್ಯನವರ ಯೂರೋಪ್ ಪ್ರವಾಸದ ಹಿಂದಿರುವ ರಹಸ್ಯ ಬಯಲು? | Oneindia kannada

  • 6 years ago
Why Siddaramaiah is touring Europe? There is a catch in this development, which has become headache for many Congress leaders. In fact, Yeddyurappa has been given green signal by BJP high command to form government in Karnataka with the help of JDS. Here is a Political analysis

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಯೂರೋಪ್ ಪ್ರವಾಸದಿಂದ ಬಿಜೆಪಿಗೆ ಅನುಕೂಲವಾಗಲಿದೆಯೇ? ಹಾಗೆಂಬುದೊಂದು ಕುತೂಹಲ ರಾಜಕೀಯ ವಲಯಗಳಲ್ಲಿ ಕಾಣಿಸಿಕೊಂಡಿದೆ. ಸಿದ್ದರಾಯ್ಯ ಯೂರೋಪ್ ಪ್ರವಾಸ ಹೋಗುವುದಕ್ಕೂ, ಬಿಜೆಪಿಗೆ ಲಾಭವಾಗುವುದಕ್ಕೂ ಏನು ಸಂಬಂಧ? ಎಂಬ ಪ್ರಶ್ನೆ ಏಳುವುದು ಸಹಜ. ಆದರೆ ಸಿದ್ದರಾಮಯ್ಯ ಅವರ ಯೂರೋಪ್ ಪ್ರವಾಸ ನಿಗದಿಯಾಗುವುದಕ್ಕೂ ಮುನ್ನ ಬಿಜೆಪಿಯಲ್ಲಿ ನಡೆದ ಒಂದು ಘಟನೆ ಇಂತಹ ಕುತೂಹಲಕ್ಕೆ ಇಂಬು ನೀಡುವಂತಿದೆ. ಸರ್ಕಾರ ರಚನೆ ಮಾಡುವುದೇ ಆದರೆ ಆಪರೇಷನ್ ಕಮಲ ಕಾರ್ಯಾಚರಣೆ ಮಾಡಬೇಕು. ಆದರೆ ಈ ಕಾರ್ಯಾಚರಣೆ ತಡವಾದಷ್ಟೂ ಬಿಜೆಪಿಗೆ ಡ್ಯಾಮೇಜ್. ಹೀಗಾಗಿ ತ್ವರಿತವಾಗಿ ಪೂರ್ಣಗೊಳಿಸುವ ವಿಶ್ವಾಸ ನಿಮ್ಮಲ್ಲಿದ್ದರೆ ಅಂತಹ ಪ್ರಯತ್ನ ಮಾಡಿ ಎಂದು ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಅಮಿತ್ ಶಾ ಸಿಗ್ನಲ್ ನೀಡಿದ್ದಾರೆ ಎಂಬುದೇ ಆ ಬೆಳವಣಿಗೆ.

Recommended