ಕರ್ನಾಟಕ ಬಜೆಟ್ 2018 : ಮುಸ್ಲಿಮರಿಗೆ ಸಿದ್ದರಾಮಯ್ಯನವರ ಭರ್ಜರಿ ಕೊಡುಗೆಗಳು | Oneindia Kannada

  • 6 years ago
Muslim community gets handful in Karnataka Budget 2018. Siddaramaiah has announced lot of bounties for the minorities in his 13th budget presentation. This was natural as Karnataka is heading towards assembly election.


ನಾವು ಯಾವುದೇ ಜಾತಿಯನ್ನು ಓಲೈಸುವುದಿಲ್ಲ, ನಮ್ಮದು ಜಾತ್ಯತೀತ ಸರಕಾರ ಎಂದು ಹೋದಲ್ಲೆಲ್ಲ ಘಂಟಾಘೋಷವಾಗಿ ಸಾರುವ ಸಿದ್ದರಾಮಯ್ಯನವರು, ಪ್ರಸ್ತುತ ಸರಕಾರದ ಕಟ್ಟಕಡೆಯ ಬಜೆಟ್ಟಿನಲ್ಲಿ ಅಲ್ಪಸಂಖ್ಯಾತರ ಪರ ತಮಗಿರುವ ಒಲವನ್ನು ಮತ್ತೆ ತೋರಿದ್ದಾರೆ. ಇನ್ನೇನು ಕರ್ನಾಟಕ ವಿಧಾನಸಭೆ ಚುನಾವಣೆ 2018ರ ದಿನಾಂಕ ಘೋಷಣೆಯಾಗುವುದೊಂದೇ ಬಾಕಿಯಿದೆ. ಏಪ್ರಿಲ್ ಕೊನೆಯ ವಾರ ಅಥವಾ ಮೇ ಮೊದಲ ವಾರದಲ್ಲಿ ಚುನಾವಣೆ ಘೋಷಣೆಯಾಗುವ ಎಲ್ಲ ಸಾಧ್ಯತೆಗಳೂ ಇವೆ. ಹೀಗಿರುವಾಗ, ಸಿದ್ದರಾಮಯ್ಯನವರು ಸಹಜವಾಗಿ ಬಜೆಟ್ಟಿನಲ್ಲಿ ಚುನಾವಣಾ ದಾಳ ಉರುಳಿಸಿದ್ದಾರೆ.

Recommended