ಮಹಾಮಸ್ತಕಾಭಿಷೇಕ 2018 : ಡಿ ಸಿ ರೋಹಿಣಿ ಸಿಂಧೂರಿಗೆ ಭೇಷ್ ಎಂದ ಡಾ ವೀರೇಂದ್ರ ಹೆಗ್ಗಡೆ | Oneindia Kannada

  • 6 years ago
Dharmasthala temple Dharmadhikari Dr Veerendra Heggade appreciated to Hassan Deputy Commissioner Rohini Sindhuri after examined the Mahamastakabhisheka preparation work in Shravanabelagola.


"ಮಹಾಮಸ್ತಕಾಭಿಷೇಕ ಹಿನ್ನೆಲೆಯಲ್ಲಿ ನಡೆದಿರುವ ಪೂರ್ವ ಸಿದ್ಧತೆಗಳನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಡೆ ಮತ್ತು ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಶನಿವಾರ ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ವೀರೇಂದ್ರ ಹೆಗ್ಡೆ, "ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನೇತೃತ್ವದಲ್ಲಿ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದು, ತಯಾರಿ ಚೆನ್ನಾಗಿದೆ. ಈ ಬಗ್ಗೆ ತೃಪ್ತಿ ಇದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಉತ್ತಮ ರೀತಿಯಲ್ಲಿ ಸಾಗಿದ್ದು, ಈ ಬಗ್ಗೆ ತೃಪ್ತಿ ಇದೆ. ಮುನಿಗಳು, ಶ್ರಾವಕರು, ಸೇವಾಕರ್ತರು, ಸ್ವಯಂ ಸೇವಕರು, ಪೊಲೀಸರು ಸೇರಿದಂತೆ ಇತರರಿಗೆ ಮಾಡಲಾಗಿರುವ ವಾಸ್ತವ್ಯ ವ್ಯವಸ್ಥೆ ಉತ್ತಮ ರೀತಿಯಲ್ಲಿ ಇದೆ. ಶ್ರೀಕ್ಷೇತ್ರ ಹಾಗೂ ತಾತ್ಕಲಿಕ ಉಪನಗರಗಳಲ್ಲಿ ಕೆಲಸಗಳು ಭರದಿಂದ ಸಾಗಿವೆ. ಇನ್ನೂ ಕೆಲವು ಕೆಲಸಗಳು ಆಗಬೇಕಿವೆ. ಪೂರ್ವತಯಾರಿ ದೃಷ್ಟಿಯಲ್ಲಿ ನೋಡುವುದಾರೆ ಈವರೆಗೂ ಆಗಿರುವ ಕೆಲಸಗಳು ತೃಪ್ತಿ ತಂದಿದೆ. ಹಾಗಾಗಿ, ನಮ್ಮ ಉತ್ಸಾಹ, ಆತ್ಮವಿಶ್ವಾಸ ಹೆಚ್ಚಿದೆ. ಇದಕ್ಕಾಗಿ ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದರು.

Recommended