ಬಿಗ್ ಬಾಸ್ ಕನ್ನಡ ಸೀಸನ್ 5 : ಬಿಗ್ ಮನೆಯ ಅಡುಗೆಮನೆಗೆ ವಾಸ್ತು ದೋಷ ಇದ್ಯಾ? | Filmibeat Kannada
  • 6 years ago
'ಬಿಗ್ ಬಾಸ್ ಕನ್ನಡ-5' ಶುರು ಆಗಿ 59 ದಿನಗಳು ಕಳೆದಿವೆ. ಅರ್ಧಕ್ಕೆ ಅರ್ಧ ಆಟ ಮುಗಿದ್ಮೇಲೆ 'ಬಿಗ್ ಬಾಸ್' ಮನೆಯಲ್ಲಿ ಅಡುಗೆ ಮನೆಯ ವಾಸ್ತು ಸರಿಯಿಲ್ವಾ ಎಂಬ ಅನುಮಾನ ಮೂಡಲು ಶುರು ಆಗಿದೆ. ಅದಕ್ಕೆ ಕಾರಣ ಏನಪ್ಪಾ ಅಂದ್ರೆ, ಅಡುಗೆ ಮನೆಯ ಡಿಪಾರ್ಟ್ ಮೆಂಟ್ ನಲ್ಲಿ ಇದ್ದವರೇ ಇಲ್ಲಿಯವರೆಗೂ ಎಲಿಮಿನೇಟ್ ಆಗಿದ್ದಾರೆ. ಹೀಗಾಗಿ, ಹೊಸ ಲೆಕ್ಕಾಚಾರ ಆರಂಭವಾಗಿದೆ. ಅದು ಕೃಷಿ ತಾಪಂಡ, ಅನುಪಮಾ ಗೌಡ ಕಡೆಯಿಂದ.... ಹಾಗ್ನೋಡಿದ್ರೆ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಹೆಚ್ಚು ಕಿರಿಕ್ ಆಗುತ್ತಿರುವುದೇ ಅಡುಗೆ, ಊಟ, ತಿಂಡಿ ವಿಚಾರಕ್ಕೆ. ಹೀಗಾಗಿ, ಅಡುಗೆ ಮಾಡುವವರೇ ಎಲ್ಲರ ಟಾರ್ಗೆಟ್ ಆಗಿದ್ದಾರೆ. ಕಾಕತಾಳೀಯ ಅಂದ್ರೆ, ಅಡುಗೆ ಮನೆಯ ಡಿಪಾರ್ಟ್ ಮೆಂಟ್ ನಲ್ಲಿ ಇರುವವರೇ ಎಲಿಮಿನೇಟ್ ಆಗುತ್ತಿದ್ದಾರೆ. ಹಾಗಾದ್ರೆ, ಇದು ವಾಸ್ತು ದೋಷವೇ.? ನಮಗಂತೂ ಗೊತ್ತಿಲ್ಲ. ಆದ್ರೆ, ಅದಕ್ಕೆ ಪೂರಕವಾಗಿರುವ ಸಾಕ್ಷಿ ಇಲ್ಲಿದೆ.
Recommended