ಪಾಕ್ ರಾಜತಾಂತ್ರಿಕರ ಜೊತೆ ಮಣಿಶಂಕರ್ ಅಯ್ಯರ್ ವಿವಾದಾತ್ಮಕ ಸಭೆ | Oneindia Kannada

  • 6 years ago
Why did Mani Shankar Aiyar call meeting with former Pakistan external minister where many Congress leaders, former army chief, former external affairs officials attend? This has turned into big controversy as many have alleged it was plot to create trouble in Gujarat election.


ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಭಾರತಕ್ಕೆ ಭೇಟಿ ನೀಡಿದಾಗ, ಕಾಂಗ್ರೆಸ್ಸಿನಿಂದ ಅಮಾನತಾಗಿರುವ ಮಣಿ ಶಂಕರ್ ಅಯ್ಯರ್ ಅವರ ನಿವಾಸದಲ್ಲಿ ನಡೆದ ಭೇಟಿಯಲ್ಲಿ ನಡೆದದ್ದು ಭಾರತ-ಪಾಕ್ ಸಂಬಂಧದ ವಿಚಾರವೋ, ಗುಜರಾತ್ ಚುನಾವಣೆಯನ್ನು ಕದಡುವ ವಿಚಾರವೋ? ಇದು ಖಾಸಗಿಯಾದ ಸಭೆಯಾಗಿದ್ದರೂ, ಕಾಂಗ್ರೆಸ್ ನ ಹಲವಾರು ನಾಯಕರು ಡಿಸೆಂಬರ್ 6ರಂದು ಮಣಿ ಶಂಕರ್ ಅಯ್ಯರ್ ಅವರ ನಿವಾಸದಲ್ಲಿ ನಡೆದಿರುವುದು ಮತ್ತು ಅಲ್ಲಿ ಸುಮಾರು ಮೂರು ಗಂಟೆಗಳ ಕಾಲ ಚರ್ಚೆ ನಡೆದಿರುವುದು ಹಲವರು ಹುಬ್ಬೇರಿಸುವಂತೆ ಮಾಡಿದೆ.ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ನಲ್ಲಿ ಮಾಡಿದ ಚುನಾವಣಾ ಪ್ರಚಾರಸಭೆಯಲ್ಲಿ, ಈ ಕುರಿತು ಪ್ರಸ್ತಾಪಿಸಿದ್ದರು. ಪಾಕಿಸ್ತಾನ ಅನವಶ್ಯಕವಾಗಿ ಗುಜರಾತ್ ಚುನಾವಣೆಯಲ್ಲಿ ಮೂಗು ತೂರಿಸುತ್ತಿದೆ. ಈ ಸಭೆಯ ನಂತರವೇ ಗುಜರಾತಿನ ಹಿಂದುಳಿದ ಸಮುದಾಯವನ್ನು ಮಣಿ ಶಂಕರ್ ಅಯ್ಯರ್ ಅವಮಾನಿಸಿದ್ದಾರೆ ಎಂದು ಮೋದಿ ಆರೋಪಿಸಿದ್ದರು.ಮಣಿ ಶಂಕರ್ ಅಯ್ಯರ್ ಅವರ ಮನೆಯಲ್ಲಿ ಈ ವಿವಾದಾತ್ಮಕ ಸಭೆ ನಡೆದ ನಂತರವೇ, ಅಯ್ಯರ್ ಅವರು ನರೇಂದ್ರ ಮೋದಿಯನ್ನು 'ನೀಚ' ಎಂದು ಕಟಕಿಯಾಡಿದ್ದರು.

Recommended