ರಿಯಾಝ್ ಹೇಳಿದ ಹಾಗೆ ದಯಾಳ್ 'ಅಹಂ' ಬಿಡಲಿಲ್ಲ: ಕ್ಷಮೆ ಕೇಳಲೇ ಇಲ್ಲ.! | Filmibeat Kannada

  • 7 years ago
ತಂಡಕ್ಕೆ ನೀಡಿದ್ದ ಮೊಟ್ಟೆಗಳನ್ನು ಕಾಪಾಡಿಕೊಳ್ಳುವ ಟಾಸ್ಕ್ ನಲ್ಲಿ ತಮ್ಮ ಮಾತನ್ನು ಮೀರಿ ರಿಯಾಝ್ ಆಟವಾಡಿದಕ್ಕೆ ಟೀಮ್ ಕ್ಯಾಪ್ಟನ್ ದಯಾಳ್ ಮುನಿಸಿಕೊಂಡರು. ರಿಯಾಝ್ ಮೇಲೆ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡು, ಎಲ್ಲರೆದುರು ದಯಾಳ್ ಕೂಗಾಡಿದರು. ನೈತಿಕತೆ ಬಗ್ಗೆ ಮಾತನಾಡಿದರು.ಕೋಪದಲ್ಲಿ ಅದೆಲ್ಲ ನಡೆದಿದ್ದರೂ, ಸಮಾಧಾನ ಆದ್ಮೇಲೆ ರಿಯಾಝ್ ರವರ ಬಳಿ ದಯಾಳ್ ಕ್ಷಮೆ ಕೇಳಬಹುದಿತ್ತು. ರಿಯಾಝ್ ಕೂಡ ಇದನ್ನೇ ನಿರೀಕ್ಷೆ ಮಾಡುತ್ತಿದ್ದರು. ಆದ್ರೆ, ನೈತಿಕತೆಯ ವಿಚಾರ ಎತ್ತಿದ ದಯಾಳ್ ಕ್ಷಮೆ ಕೇಳಲಿಲ್ಲ. ಇಡೀ ವಾರದ ಗದ್ದಲ-ಗಲಾಟೆ, ವಾದ-ವಿವಾದ-ವಾಕ್ಸಮರ ಬಗ್ಗೆ ಪಂಚಾಯತಿ ನಡೆಸಲು ಸುದೀಪ್ ಬಂದಾಗ ''ನೀವು ಯಾರಿಗಾದರೂ ಕ್ಷಮೆ ಕೇಳಲು, ಯಾರಿಂದ ಕ್ಷಮೆ ಕೇಳಿಸಿಕೊಳ್ಳಲು ಇಚ್ಛಿಸುತ್ತೀರಾ.?'' ಎಂದು 'ಬಿಗ್ ಬಾಸ್' ಮನೆ ಸದಸ್ಯರಲ್ಲಿ ಕೇಳಿದರು. ಆಗಲೂ ರಿಯಾಝ್ ರವರ ಬಳಿ ದಯಾಳ್ ಕ್ಷಮೆ ಕೇಳಲೇ ಇಲ್ಲ.! ''ನನ್ನ ಬಳಿ ದಯಾಳ್ ಕ್ಷಮೆ ಕೇಳಬೇಕು. ಯಾಕಂದ್ರೆ, ಅವರು ಮನುಷ್ಯತ್ವ ಇಲ್ಲದೆ ನಡೆದುಕೊಂಡಿದ್ದಾರೆ. ಮನುಷ್ಯತ್ವ ಎಂಬ ಭಾವನೆಯೇ ಅವರಲ್ಲಿ ಇಲ್ಲ. ಅವರು ಕ್ಲಾಸ್ ಲೆಸ್ ಮ್ಯಾನ್ ಅಂತ ನಿರ್ಧಾರ ಮಾಡಿಕೊಂಡಿದ್ದೇನೆ. ಅಷ್ಟು ಕೆಟ್ಟ ಪದಗಳನ್ನು ಉಪಯೋಗಿಸಿ ಬೈಯ್ಯುತ್ತಾರೆ. ಇಲ್ಲಿಯವರೆಗೂ ಅವರು ನನ್ನನ್ನ ಕ್ಷಮೆ ಕೇಳಿಲ್ಲ. ಕ್ಷಮೆ ಕೇಳಬಾರದು ಎಂಬ ಅಹಂ ಅವರಲ್ಲಿ ಇರಬಹುದು. ಆದ್ರೆ, ಅವರು ಕ್ಷಮೆ ಕೇಳಬೇಕು ಎಂದು ನಾನು ಎಕ್ಸ್ ಪೆಕ್ಟ್ ಮಾಡುತ್ತೇನೆ'' ಎಂದು ಸುದೀಪ್ ಮುಂದೆ ರಿಯಾಝ್ ಹೇಳಿದರು.

Bigg Boss Kannada 5: Dayal Padmanabhan refused to apologize Riyaz

Recommended